Top News

ಇಂದಿನಿಂದ ಸಮೀಕ್ಷೆ ಪ್ರಾರಂಭ: ಗಣತಿದಾರರು ಕೇಳುವ ಆ 60 ಪ್ರಶ್ನೆಗಳೇನು.?



ಬೆಂಗಳೂರು: ಇಂದಿನಿಂದ (ಸೆ.22)ರಿಂದ ಹಿಂದುಳಿದ ವರ್ಗಗಳ ಆಯೋಗದಿಂದ ರಾಜ್ಯದ ಜನರ ಸ್ಥಿತಿಗತಿ ತಿಳಿದುಕೊಳ್ಳಲು ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿ ಸಮೀಕ್ಷೆ (ಸಾಮಾಜಿಕ ಗಣತಿ) ಪ್ರಾರಂಭವಾಗಲಿದೆ. ಈ ಗಣತಿಯಲ್ಲಿ ಪ್ರತೀ ಮನೆಯಿಂದ 60 ಪ್ರಶ್ನೆಗಳನ್ನು ಕೇಳಲಿದ್ದಾರೆ. ಜನರು ಈ ಸಮೀಕ್ಷೆಗೆ ತಯಾರಾಗಿರಲು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಗಣತಿಗಾರರು ಮನೆಗೆ ಬಂದು ಈ ಕೆಳಕಂಡ 60 ಪ್ರಶ್ನೆಗಳಿಗೆ ಉತ್ತರ ಕೇಳಲಿದ್ದಾರೆ:

1. ಮನೆಯ ಮುಖ್ಯಸ್ಥರ ಹೆಸರು

2. ತಂದೆಯ ಹೆಸರು

3. ತಾಯಿಯ ಹೆಸರು

4. ಕುಟುಂಬದ ಕುಲಹೆಸರು

5. ಮನೆ ವಿಳಾಸ

6. ಮೊಬೈಲ್ ಸಂಖ್ಯೆ

7. ರೇಷನ್ ಕಾರ್ಡ್ ಸಂಖ್ಯೆ

8. ಆದಾರ್ ಸಂಖ್ಯೆ

9. ಮತದಾರರ ಗುರುತಿನ ಚೀಟಿ ಸಂಖ್ಯೆ

10. ಕುಟುಂಬದ ಒಟ್ಟು ಸದಸ್ಯರು

11. ಧರ್ಮ

12. ಜಾತಿ / ಉಪಜಾತಿ

13. ಜಾತಿ ವರ್ಗ (SC/ST/OBC/General/Other)

14. ಜಾತಿ ಪ್ರಮಾಣ ಪತ್ರ ಇದೆಯೇ?

15. ಪ್ರಮಾಣ ಪತ್ರ ಸಂಖ್ಯೆ

16. ಜನ್ಮ ದಿನಾಂಕ

17. ವಯಸ್ಸು

18. ಲಿಂಗ (ಪುರುಷ/ಸ್ತ್ರೀ/ಇತರೆ)

19. ವೈವಾಹಿಕ ಸ್ಥಿತಿ

20. ಜನ್ಮ ಸ್ಥಳ

21. ವಿದ್ಯಾಭ್ಯಾಸದ ಮಟ್ಟ

22. ಮನೆಯಲ್ಲಿ ಓದಲು ಬಲ್ಲವರು ಎಷ್ಟು?

23. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆಯೇ?

24. ಶಾಲೆಯ ಪ್ರಕಾರ (ಸರ್ಕಾರಿ/ಖಾಸಗಿ)

25. ಮನೆಯಲ್ಲಿ ಶಾಲೆ ಬಿಟ್ಟವರು ಇದೆಯೇ?

26. ಮನೆಯ ಮುಖ್ಯ ಉದ್ಯೋಗ

27. ಎಷ್ಟು ಜನರು ಉದ್ಯೋಗದಲ್ಲಿದ್ದಾರೆ?

28. ಕೆಲಸದ ಪ್ರಕಾರ (ಸರ್ಕಾರಿ/ಖಾಸಗಿ)

29. ನಿರುದ್ಯೋಗಿಗಳು ಇದೆಯೇ?

30. ದಿನಸಿ ಆದಾಯ

31. ತಿಂಗಳ ಆದಾಯ

32. ತಿಂಗಳ ಖರ್ಚು

33. ಸಾಲ ಇದೆಯೇ?

34. BPL ಕಾರ್ಡ್ ಇದೆಯೇ?

35. ಪಿಂಚಣಿ ಪಡೆಯುತ್ತೀರಾ?

36. ಒಟ್ಟು ಜಮೀನು

37. ಕೃಷಿ/ನಿವಾಸಿ ಜಮೀನು?

38. ಮನೆ ಸ್ವಂತದ್ದೇ/ಬಾಡಿಗೆ?

39. ಮನೆಯ ಪ್ರಕಾರ (ಕಚ್ಚಾ/ಪಕ್ಕಾ)

40. ವಿದ್ಯುತ್ ಸಂಪರ್ಕ ಇದೆಯೇ?

41. ಕುಡಿಯುವ ನೀರಿನ ಮೂಲ

42. ಶೌಚಾಲಯ ಇದೆಯೇ?

43. ಮನೆಯಲ್ಲಿ ಎಷ್ಟು ಕೊಠಡಿಗಳು?

44. ಇಂಟರ್ನೆಟ್/ಮೊಬೈಲ್ ಸೌಲಭ್ಯ ಇದೆಯೇ?

45. ವಾಹನ ಇದೆಯೇ (ಸೈಕಲ್/ಬೈಕ್/ಕಾರು/ಟ್ರಾಕ್ಟರ್)?

46. ರೇಷನ್ ಸಬ್ಸಿಡಿ ಸಿಗುತ್ತಿದೆಯೇ?

47. ವಸತಿ ಯೋಜನೆ ಲಾಭ ಪಡೆದಿದ್ದೀರಾ?

48. ವಿದ್ಯಾರ್ಥಿವೇತನ ಪಡೆದಿದ್ದೀರಾ?

49. ಮೀಸಲಾತಿ ಲಾಭ ಪಡೆದಿದ್ದೀರಾ?

50. ಆರೋಗ್ಯ ಯೋಜನೆ ಲಾಭ ಇದೆಯೇ?

51. ಮನೆಯಲ್ಲಿ ವಿಧವೆ ಇದೆಯೇ?

52. ಅಂಗವಿಕಲರು ಇದೆಯೇ?

53. ಹಿರಿಯ ನಾಗರಿಕರು (60+) ಇದೆಯೇ?

54. ಆರು ವರ್ಷದೊಳಗಿನ ಮಕ್ಕಳು ಎಷ್ಟು?

55. ಯುವಕರು (18-35) ಎಷ್ಟು?

56. ಯಾವುದೇ ಸಾಮಾಜಿಕ ಸಂಘ/ಸಂಸ್ಥೆಯಲ್ಲಿ ಸೇರಿದ್ದೀರಾ?

57. ಮನೆಯಲ್ಲಿ ನೋಂದಾಯಿತ ಮತದಾರರು ಎಷ್ಟು?

58. ಮತದಾನ ಮಾಡುವವರೇ?

59. ಜಾತಿ ಆಧಾರದ ಮೇಲೆ ಬೇಧಭಾವ ಅನುಭವಿಸಿದ್ದೀರಾ?

60. ಜಾತಿ ಸಮೀಕ್ಷೆಯಿಂದ ನಿಮಗೆ ಏನು ಪ್ರಯೋಜನ?


ಈ 60 ಪ್ರಶ್ನೆಗಳ ಸಮೀಕ್ಷೆಗೆ ಉತ್ತರಿಸುವುದು ಕಡ್ಡಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಸಕಾಲಕ್ಕೆ ಮಾಹಿತಿ ಹೊಂದಿ ಗಣತಿಗಾರರಿಗೆ ನೀಡಲು ತಯಾರಾಗಿರಬೇಕು.

Post a Comment

ನವೀನ ಹಳೆಯದು